kannada padya - kannada poetry
Sunday, 13 May 2012
ಮನಸ್ಸೇ ಎನ್ನ ಮನ್ನಿಸು
ಸೃಷ್ಟಿಯ ವಿಸ್ತಾರ ನೀನು
ದೇಹದ ಸೀಮಿತ ನಾನು
ನನ್ನ ನಿನ್ನ ನಂಟೇನು ?
ಮಂದಸ್ಮಿತೆಯೆ , ಮನೋಜ್ಯೋತಿಯೇ
ಅಕ್ಕರೆಯಿಂದ ಕರವ ಹಿಡಿದವಳೆ
ಕಾವ್ಯಾಮ್ರುತವ ಹರಿಸುವವಳೆ
ನಿನಗಿರಲಿ ನನ್ನ ಭಕ್ತಿಯ ಕಟ್ಟಳೆ .
ಸಾಕು ಸಾಕೆನಗೆ
ತೀರದ ಈ ಹಂಚಿಕೆ
ಬೇಕು ಬೇಕೆನಗೆ
ಸಾವಿಲ್ಲದ ಸಂಚಿಕೆ .
ಹೃದಯ ಮಂದಿರಕೆ ದಾರಿ ಯಾವುದು?
ಅದರ ಕದದ ಕೀಲಿ ಯಾವುದು?
ಅದ ಬೆಳಗುವ ಜ್ಯೋತಿ ಯಾವುದು?
ನಿನ್ನ ಕೃಪೆಯಿಲ್ಲದೆ , ಏನೂ ಕಾಣದು.
ತರತರ ಗೀಳಿನ ಬಾಳು
ಹೊಸಹೊಸ ಗೀಳಿನ ಗೋಳು
ಬೀಳದೆ ಬಲೆಗೆ ಸ್ವಲ್ಪ ತಾಳು
ಗೀಳು ಗೋಳಿಲ್ಲದ ಜೀವನ ಬಾಳು
Newer Posts
Older Posts
Home
Subscribe to:
Comments (Atom)